COVID-19 Resources for Mental Health Coaches... Learn More
“ಶ್ರೀಅನ್ನಪೂರ್ಣೇಶ್ವರಿ ಪ್ರಸಾದ ನಿಲಯದ ಸೇವಾ ಕಾರ್ಯ ಶ್ಲಾಘನೀಯ”


ಗದಗ, ಆ. 22. ಹಸಿದವರಿಗೆ ಅನ್ನ ನೀಡುವುದು ಎಲ್ಲ ಕಾರ್ಯಗಳಿಗಿಂತಲೂ ಪುಣ್ಯದ ಕಾರ್ಯವಾಗಿದೆ. ಇದನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ಶ್ರೀ ಅನ್ನಪೂರ್ಣೇಶ್ವರಿ ಪ್ರಸಾದ ನಿಲಯದ ಸೇವಾ ಕಾರ್ಯ ಶ್ಲಾಘನೀಯವಾಗಿದೆ ಎಂದು, ಖ್ಯಾತ ಮನೋರೋಗ ಚಿಕಿತ್ಸಕ ಹಾಗೂ ಜ. ತೋಂಟದಾರ್ಯ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರಾದ ಡಾ. ಆನಂದ ಪಾಂಡುರಂಗಿ ಅವರು ಹೇಳಿದರು. ಅವರು ನಗರದ ಮಹಾತ್ಮಾ ಗಾಂಧಿ ವೃತ್ತದ ಹತ್ತಿರ ಹಳೇ ಜಿಲ್ಲಾಸ್ಪತ್ರೆಯ ಆವರಣದಲ್ಲಿರುವ, ಶ್ರೀ ಅನ್ನಪೂರ್ಣೇಶ್ವರಿ ಪ್ರಸಾದ ನಿಲಯ (5ರೂ.ಗೆ ಹೊಟ್ಟೆ ತುಂಬಾ ಊಟ)ದಲ್ಲಿ ಪ್ರಸಾದ ವಿತರಿಸಿ ಮಾತನಾಡಿದರು. ಅತಿಥಿಗಳಾದ ಕುಷ್ಟಗಿಯ ಮಾಜಿ ಶಾಸಕ ಕೆ. ಶರಣಪ್ಪನವರು ಸೇವೆಯ ಬಗ್ಗೆ ಅಭಿಮಾನ ವ್ಯಕ್ತ ಪಡಿಸಿದರು. ಈ ಸಂದರ್ಭದಲ್ಲಿ ತೋಂಟದಾರ್ಯ ವಿದ್ಯಾಪೀಠದ ಆಡಳಿತಾಧಿಕಾರಿ ಎಸ್.ಎಸ್.ಪಟ್ಟಣಶೆಟ್ಟಿ, ಹಿರಿಯರಾದ ಎಸ್ ಎಸ್. ಕಳಸಾಪೂರ ನಿಲಯದ
ಹಾಗೂ ಶ್ರೀ ಅನ್ನಪೂರ್ಣೇಶ್ವರಿ ಪ್ರಸಾದ ಎಸ್. ಎಸ್. ಕಳಸಾಪುರ ಸೇರಿದಂತೆ ಗೌರವಾಧ್ಯಕ್ಷರಾದ ಮುಂತಾದವರು ಉಪಸ್ಥಿತರಿದ್ದರು








