COVID-19 Resources for Mental Health Coaches... Learn More
“ಮಾದಕ ವಸ್ತುಗಳಿಂದ ದೂರವಿರಿ – ಭವಿಷ್ಯದತ್ತ ಮುನ್ನಡೆಯಿರಿ”


ವಿಜಯ ಕರ್ನಾಟಕ ದಿನಪತ್ರಿಕೆ ಧಾರವಾಡ ಜಿಲ್ಲಾ ನೌಕರರ ಸಂಘದ ಸಹಯೋಗದೊಂದಿಗೆ ಧಾರವಾಡದ ನೌಕರರ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಮಾದಕ ವಸ್ತು ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಸ್.ಎಫ್.ಸಿದ್ದನಗೌಡರ, ವೈ.ಬಿ. ಅಣ್ಣಿಗೇರಿ ಕಾಲೇಜು ಅಧ್ಯಕ್ಷ ಪ್ರೊ.ನಾಗೇಶ ಅಣ್ಣಿಗೇರಿ, ಮನೋವೈದ್ಯ ಡಾ.ಆದಿತ್ಯ ಪಾಂಡುರಂಗಿ, ಶ್ರೀ ಪಂಜುರ್ಲಿ ಹೋಟೆಲ್ಸ್ ಸಮೂಹ ಸಂಸ್ಥಾಪಕ ರಾಜೇಂದ್ರ ಶೆಟ್ಟಿ, ಶ್ರವ್ಯಾ ಆಸ್ಪತ್ರೆ ಕನ್ಸಲ್ಟಂಟ್ ಫಿಜಿಸಿಯನ್ ಡಾ.ಸುಧೀರ ಜಂಬಗಿ, ಕೆ.ಎಚ್.ಕಟ್ಟೂರ ಕಾಲೇಜಿನ ಎನ್ ಎಸ್ಎಸ್ ಅಧಿಕಾರಿ ಈರಪ್ಪ ಪತ್ತಾರ ಹಾಜರಿದ್ದರು.
ಡ್ರಗ್ಸ್ ಜಾಲ ಚಕ್ರವ್ಯೂಹ ಇದ್ದಂತೆ. ಇದರಿಂದ ಹೊರಬರುವುದು ಕಷ್ಟ ಈ ಬಗ್ಗೆ ಯೋಚಿಸಲೂಬೇಡಿ. ಮಾದಕ ವಸ್ತುಗಳು ನಿಮ್ಮ ಗುರಿ, ಸಂತೋಷವನ್ನೇ ಕೊಲ್ಲುತ್ತವೆ.-ಹೀಗೆ ಯುವ ಸಮುದಾಯಕ್ಕೆ ಎಚ್ಚರಿಕೆ ನೀಡಿದವರು ವೈದ್ಯರು, ಶಿಕ್ಷಣ ತಜ್ಞರು, ನೌಕರರ ವಲಯದ ಪರಿಣಿತರು, ಉದ್ಯಮಿಗಳು.
ವಿಜಯ ಕರ್ನಾಟಕ ದಿನಪತ್ರಿಕೆ ಧಾರವಾಡ ಜಿಲ್ಲಾ ನೌಕರರ ಸಂಘದ ಸಹಯೋಗದೊಂದಿಗೆ ನೌಕರರ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಮಾದಕ ವಸ್ತು ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ವೈದ್ಯರು, ಶಿಕ್ಷಣ ತಜ್ಞರು ತಾವು ಕಂಡ ಕೆಲ ಅನುಭವಗಳ ಚಿತ್ರಣ ತೆರೆದಿಡುವ ಜತೆಗೆ ಡ್ರಗ್ಸ್ ದುಶ್ಚಟ ಬದುಕಿಗೆ ಹೇಗೆ ಮಾರಕವಾಗಿದೆ ಎಂಬುದನ್ನು ಔಚಿತ್ಯಪೂರ್ಣವಾಗಿ ತೆರೆದಿಟ್ಟರು. ನೂರಾರು ಸಂಖ್ಯೆಯಲ್ಲಿ ಸೇರಿದ್ದ ವಿದ್ಯಾರ್ಥಿಗಳು ಆಸಕ್ತಿಯಿಂದ, ತದೇಕ ಚಿತ್ತದಿಂದ ಎಲ್ಲರ ಭಾಷಣಗಳನ್ನೂ ಕೇಳಿದರು.
ಹದಿಹರೆಯದವರೇ ಬಲಿ:
“ಡ್ರಗ್ಸ್ ನಗರ, ಹಳ್ಳಿ ಎಂಬ ತಾರತಮ್ಯ ಇಲ್ಲದೇ ದೇಶವನ್ನು ವ್ಯಾಪಿಸಿದೆ. ಯುವಕರ ಜೀವನ ಸಾಯಿಸುತ್ತಿದೆ. ಭಾರತದ ಒಟ್ಟು ಜನಸಂಖ್ಯೆಯ ಪೈಕಿ 30 ಕೋಟಿಗೂ ಅಧಿಕ (ಶೇ.20ರಷ್ಟು) ಜನ 20 ವರ್ಷದೊಳಗಿನವರು. ಆದರೆ, ಈ ಹದಿಹರೆಯದವರ ಪೈಕಿ ಶೇ.13ರಷ್ಟು ಡ್ರಗ್ಸ್ ಚಟಕ್ಕೆ ಪಂಜುರ್ಲಿ ಹೋಟೆಲ್ಸ್ ಸಮೂಹದ ಅಂಟಿಕೊಂಡಿದ್ದಾರೆ ಎಂದು ಸಮೀಕ್ಷೆ ಸಂಸ್ಥಾಪಕ ರಾಜೇಂದ್ರ ಶೆಟ್ಟಿ ”ನಾನು ಹೇಳುತ್ತಿದೆ. ಹೀಗಾಗಿ ಭವಿಷ್ಯದ ಹಸಿ ಮುಂಬಯಿಯಲ್ಲಿ ಚಹಾ ಪ್ರಜೆಗಳು ಯಾವ ಹಾದಿಯಲ್ಲಿ ಸಾಗುತ್ತಿದ್ದಾರೆ ಎಂಬುದರ ಬಗ್ಗೆ ಯೋಚಿಸ ಬೇಕಿದೆ” ಎನ್ನುತ್ತಲೇ ಡ್ರಗ್ಸ್ ಜಗತ್ತಿನ ಕರಾಳ ಸಂಗತಿಗಳನ್ನು ಮನೋವೈದ್ಯ ಡಾ.ಆದಿತ್ಯ ಪಾಂಡುರಂಗಿ ಸಂದರ್ಭೋಚಿತವಾಗಿ ತೆರೆದಿಟ್ಟರು
ದೇಶಕ್ಕೆ ಮಾರಕ
ಡ್ರಗ್ಸ್ ವ್ಯಸನಿಗಳ ಬದುಕು ಹಾಳಾಗಿರುವ ವಾಸ್ತವತೆಯನ್ನು ಬಿಚ್ಚಿಟ್ಟ ಪಂಜುರ್ಲಿ ಹೋಟೆಲ್ ಸಮೂಹದ ಸಂಸ್ಥಾಪಕ ರಾಜೇಂದ್ರ ಶೆಟ್ಟಿ “ನಾನೂ ಮುಂಬೈಯಲ್ಲಿ ಚಹಾ ಮಾರುತಿದ್ದಾಗ ಅದೆಷ್ಟೋ ಜನ ಡ್ರಗ್ಸನಿಂದಲೇ ವೈಯಕ್ತಿಕ ನೆಮ್ಮದಿ ಕೆಲವರು ಕುಟುಂಬ ಕೆಲವರು ಜೀವ ಕಳೆದುಕೊಂಡಿದ್ದಾರೆ. ಮಾದಕ ವಸ್ತು ದೇಶಕ್ಕೆ ಮಾರಕ ಆಗುತ್ತಿದೆ. ಯುವಸಮೂಹ ತಮ್ಮನ್ನು ತಾವು ಕಾಪಾಡಿಕೊಂಡು ಡ್ರಗ್ಸ್ ವಿರುದ್ಧ ಒಗ್ಗಟ್ಟಿನ ಹೋರಾಟಕ್ಕೆ
ಧುಮುಕ ಬೇಕು” ಎಂದು ಕಿವಿಮಾತು ಹೇಳಿದರು.
ಸ್ವಸ್ಥ ಯುವಕರೇ ದೇಶದ ಭವಿಷ್ಯ
ಖ್ಯಾತ ಹೃದ್ರೋಗ ತಜ್ಞ ಡಾ.ಸುಧೀರ ಜಂಬಗಿ ಅವರು ಡ್ರಗ್ಸ್ ಆರೋಗ್ಯದ ಮೇಲೆ ಹೇಗೆಲ್ಲ ಪರಿಣಾಮ ಬೀರಲಿದೆ ಎಂಬುದರ ಬಗ್ಗೆ ವೈಜ್ಞಾನಿಕ ಅಂಶಗಳನ್ನು ಉಲ್ಲೇಖಿಸಿ ಮಾತನಾಡಿದರು. ಸರಕಾರಿ ನೌಕರರ ಜಿಲ್ಲಾಧ್ಯಕ್ಷ ಸಿದ್ದನಗೌಡರ ಹಾಗೂ ವೈ.ಬಿ.ಅಣ್ಣಿಗೇರಿ ಕಾಲೇಜಿನ ಚೇರಮನ್ ಪ್ರೊ.ನಾಗೇಶ ಅಣ್ಣಿಗೇರಿ ಮಾತನಾಡಿ, ಯುವಕರೇ ದೇಶದ ಭವಿಷ್ಯ ಎಂಬ ಕಾಲವೊಂದಿತ್ತು. ಈಗ ಆರೋಗ್ಯಕರ ಯುವಕರೇ ದೇಶದ ಭವಿಷ್ಯ ಸಂಘದಎನ್ನುವ ಸ್ಥಿತಿಗೆ ನಾವು ತಲುಪಿದ್ದೇವೆ. ಕೆಟ್ಟ ಮೇಲೆ ಬುದ್ದಿ ಬರುವುದು ಬೇಡ. ಈಗಲೇ ಜಾಗೃತಿ ವಹಿಸಬೇಕು. ಏನೇ ಮಾಡುವ ಮುನ್ನ 10 ಯೋಚಿಸಬೇಕು ಎಂದು ವಿಮಸಿದರು. ಕೆ.ಎಚ್.ಕಟ್ಟೂರ ಕಾಲೇಜಿನ ಎನ್ಎಸ್ಎಸ್ ಅಧಿಕಾರಿ ಈರಪ್ಪ ಪತ್ತಾರ ಮತ್ತಿತರರು ಉಪಸ್ಥಿತರಿದ್ದರು.

