COVID-19 Resources for Mental Health Coaches... Learn More
ಸಕಾರಾತ್ಮಕ ಚಿಂತನೆಯಿಂದ ಸುಂದರ ಬದುಕು

ವಿಶೇಷಚೇತನರು ತಮ್ಮ ನ್ಯೂನತೆಗಳನ್ನು ಮೀರಿ ಸವಾಲು ಮೆಟ್ಟಿನಿಂತು ಮಹತ್ತರ ಗುರಿ ಸಾಧಿಸಬೇಕೆಂದು ಡಿಮಾನ್ಸ್ನ ಮನೋ ರೋಗ ಚಿಕಿತ್ಸಾ ವಿಭಾಗದ ಪ್ರಾಧ್ಯಾಪಕ ಡಾ. ಆದಿತ್ಯ ಪಾಂಡುರಂಗಿ ಹೇಳಿದರು. ಗಿರಿ ಫೌಂಡೇಶನ್ ಹಾಗೂ ಸಮರ್ಥನಂ ಅಂಗವಿಕಲರ ಸಂಸ್ಥೆಯ ಸಹಯೋಗದೊಂ ದಿಗೆ ಗಾಂಧಿನಗರದ ಸಮರ್ಥನಂ ಸಂಸ್ಥೆಯ ಸಭಾಂಗಣದಲ್ಲಿ ವಿಶ್ವಮಾನಸಿಕ ಆರೋಗ್ಯ ದಿನಾಚಾರಣೆ ಅಂಗವಾಗಿ ಮಂಗಳವಾರ ಏರ್ಪಡಿಸಿದ್ದ ವಿಶೇಷ ಉಪನ್ಯಾಸದಲ್ಲಿ ಅವರು ಧನಾತ್ಮಕ ಚಿಂತನೆ ಹಾಗೂ ಸೌಹಾರ್ದಯುತ ಸಂಬಂಧಗಳು ಎಂಬ ವಿಷಯದ ಮೇಲೆ ಮಾತನಾಡಿದರು. ಬದುಕನ್ನು ಉತ್ಕಟವಾಗಿ ಪ್ರೀತಿಸಬೇಕು ಹಾಗೂ ಪ್ರತಿ ದಿನವೂ ಹೊಸದನ್ನು ತಿಳಿದು ಕೊಳ್ಳುವ ಹಾಗೂ ಅನ್ವೇಷಿಸುವ ಮನೋ ಧಾರವಾಡ ಗಾಂಧಿನಗರದ ಸಮರ್ಥನಂ ಸಂಸ್ಥೆ ಸಭಾಂಗಣದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಅಂಗವಾಗಿ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಡಾ.ಆದಿತ್ಯ ಪಾಂಡುರಂಗಿ ಮಾತನಾಡಿದರು. ಭಾವವನ್ನು ಬೆಳೆಸಿಕೊಳ್ಳಬೇಕು. ಇಂದಿನ ಧಾವಂತದ ಜೀವನದಿಂದ ಉಂಟಾಗುವ ಒತ್ತಡವನ್ನು ಸಮರ್ಪಕವಾಗಿ ನಿಭಾಯಿಸ ಬೇಕು ಅಲ್ಲದೇ ಸಕಾಲಕ್ಕೆ ತಜ್ಞ ವೈದ್ಯರ ಸಲಹೆಯನ್ನು ಅವರು ತಿಳಿಸಿದರು. ಪಡೆದುಕೊಳ್ಳಬೇಕೆಂದು ಗಿರಿ ಫೌಂಡೇಶನ್ನ ಅಭಿವೃದ್ಧಿ ಸಲಹೆಗಾರ ಪ್ರದೀಪ ಮೇಲ್ಗಡೆ ಪ್ರಾಸ್ತಾವಿಕ ಮಾತನಾಡಿ ದರು. ಸಮರ್ಥನಂ ಸಂಸ್ಥೆಯ ಧಾರವಾಡ ಶಾಖಾ ಮುಖ್ಯಸ್ಥ ಕೃಷ್ಣಾ ಲಮಾಣಿ ಸ್ವಾಗತಿಸಿದರು. ಸಂಸ್ಥೆಯ ಪ್ರಾದೇಶಿಕ ವ್ಯವಸ್ಥಾಪಕ ರೇವಣ ಸಿದ್ದಯ್ಯ ವಂದಿಸಿದರು