COVID-19 Resources for Mental Health Coaches... Learn More
“ಮಕ್ಕಳ ಸಾಮರ್ಥ್ಯ ಅರಿತು ಶಿಕ್ಷಣ ನೀಡಿ”

ಚಿಕ್ಕ ಮಕ್ಕಳ ಮಾನಸಿಕ ಹಾಗೂ ದೈಹಿಕ ಸಾಮರ್ಥ್ಯವನ್ನು ಅರಿತು ಶಿಕ್ಷಕರು ಶಿಕ್ಷಣ ನೀಡಲು ಮುಂದಾಗಬೇಕು. ಪಾಲಕರು ಮತ್ತು ಶಿಕ್ಷಕರು ಮಕ್ಕಳ ಮಾನಸಿಕ ಉನ್ನತಿಗಾಗಿ ದುಡಿಯಬೇಕಾಗಿದೆ ಪ್ರಾಮಾಣಿಕವಾಗಿ ಎಂದು ಧಾರವಾಡದ ಖ್ಯಾತ ಮನೋವೈದ್ಯೆ ಡಾ. ಸ್ವಪ್ನಾ ಪಾಂಡುರಂಗಿ ಹೇಳಿದರು. ಶುಕ್ರವಾರ ಪಟ್ಟಣದ V R D M ಟ್ರಸ್ಟ್ನ ವಿವಿಡಿ ಸ್ಕೂಲ್ ಆಪ್ ಎಕ್ಸಲೆನ್ಸ್ C B S C ಶಾಲೆಯ ಯುಕೆಜಿ ವಿದ್ಯಾರ್ಥಿಗಳ ಗ್ರಾಜುವೇಶನ್ ಡೇ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಪಾಲಕರು ಮತ್ತು ಶಿಕ್ಷಕರು ಮುಕ್ತ ವಾತಾವರಣದಲ್ಲಿ ಮಕ್ಕಳೊಂದಿಗೆ ಹೆಚ್ಚಿನ ಸಮಯ ಕಳೆಯಬೇಕಾಗಿದೆ. ಮಕ್ಕಳ ಮನಸ್ಸನ್ನು ವಿವಿಡಿ ಸಿಬಿಎಸ್ ಸಿ ಶಾಲೆಯಲ್ಲಿ ಯುಕೆಜಿ ಮಕ್ಕಳ ಗ್ರಾಜುವೇಶನ್ ಡೇ ಆಚರಿಸಲಾಯಿತು. ಡಾ. ಸ್ವಪ್ಪಾ ಪಾಂಡುರಂಗಿ ಚಾಲನೆ ನೀಡಿದರು.
ಅರಿಯಲು ಮುಂದಾಗಬೇಕಾಗಿದೆ ಎಂದರು. ಮಕ್ಕಳ ಶೈಕ್ಷಣಿಕ ತಜ್ಞೆ ಸಂಗೀತಾ ಪ್ರಭು ಮಾತನಾಡಿ, ಮಕ್ಕಳಿಗೆ ಶಿಕ್ಷಣ ನೀಡುವಲ್ಲಿ ಪಾಲಕರ ಪಾತ್ರವು ಮುಖ್ಯವಾಗಿದೆ. ಮನೆಯೇ ಮೊದಲ ಪಾಠಶಾಲೆಯಾಗಿದ್ದು ಪಾಲಕರು ಮಕ್ಕಳಿಗೆ ಮೊಬೈಲ್ನಿಂದ ದೂರ ಉಳಿದು ಚಿಕ್ಕ ವಯಸ್ಸಿನಲ್ಲಿಯೇ ಪುಸ್ತಕ ಓದುವ ಹವ್ಯಾಸ ಬೆಳೆಸಲು ಕರೆ ನೀಡಿದರು. ಶಾಲೆಯ 67 ವಿದ್ಯಾರ್ಥಿಗಳಿಗೆ ಗ್ರಾಜುವೇಶನ್ ಕ್ಯಾಪ್ ತೊಡಿಸಿ, ಪ್ರಮಾಣ ಪತ್ರ ವಿತರಿಸಲಾಯಿತು.
ಪ್ರಾಚಾರ್ಯ ಬಸವರಾಜು ಎಚ್. ಎಮ್. ಸಂಗೀತಾ ಮೇಲಗೇರಿ, ದಿಶಾ ನಾಯ್ಕ ಹಾಗೂ ನೆಲ್ಲಿ ಗೋನ್ಸಾಲಿಸ್ ಇದ್ದರು.


